-
My Cart:
Rs. 0.00 0My Cart
0 ItemsYour cart is empty
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ೩೫ ನೆಯ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ ವಿಭೂಷಿತ ಅಭಿನವ ವಿದ್ಯಾತೀರ್ಥರು, ಬ್ರಹ್ಮನಿಷ್ಠರು ಮತ್ತು ತರ್ಕ-ವೇದಾಂತಾದಿ ಶಾಸ್ತ್ರಗಳಲ್ಲಿ ಪಾರಂಗತರು ಹಾಗೂ ಸೂಕ್ಷ್ಮದರ್ಶಿಗಳು, ಪ್ರತ್ಯುತ್ಪನ್ನಮತಿಗಳು, ಜನರ ಮನೋಭಾವವನ್ನು ಆಳವಾಗಿ ಅರಿತವರು, ಅವ್ಯಾಜ-ಕರುಣಾಮೂರ್ತಿಗಳು, ಸರ್ವಭೂತ-ಹಿತಕಾರಿಗಳು, ಅತಿ ಸರಳ ಸ್ವಭಾವದವರು, ಅನೇಕ ಭಾಷೆಗಳಲ್ಲಿ ಚತುರರು ಮತ್ತು ಪ್ರಖರ ವಾಗ್ಮಿಗಳು ಆಗಿದ್ದ ಕಾರಣ, ಸದ್ಗುರುಗಳಾಗಿ ಉಪದೇಶಗಳನ್ನು ನೀಡುವವರಲ್ಲಿ ಅಗ್ರಗಣ್ಯರಾಗಿದ್ದರು. ಅದರಲ್ಲೂ ವಿಶೇಷವಾಗಿ ಆಯಾ ಸಂದರ್ಭಗಳಲ್ಲಿ ಗುರುಗಳು ತಾವೇ ರೂಪಿಸಿಕೊಂಡ ಕಥೆಗಳ ಮತ್ತು ವೇದಗಳು, ರಾಮಾಯಣ, ಮಹಾಭಾರತ, ಪುರಾಣಗಳು ಮುಂತಾದವುಗಳನ್ನು ಆಧರಿಸಿದ ಕಥೆಗಳ ಮೂಲಕ, ಬಹಳ ಜಟಿಲವಾದ ತತ್ತ್ವಗಳನ್ನು ಕೂಡ, ಸಾಮಾನ್ಯ ಜನರಿಗೂ ಸುಲಭವಾಗಿ, ಅಂತೆಯೇ ಸಮಗ್ರವಾಗಿ, ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸುವ ಸ್ವಭಾವಸಿದ್ಧವಾದ ಸಾಮರ್ಥ್ಯವನ್ನು ಹೊಂದಿದ್ದರು. ಅವರ ಸಾರ್ವಜನಿಕ ಪ್ರವಚನಗಳಿಂದ ಮಾತ್ರವಲ್ಲದೆ ಅವರೊಂದಿಗೆ ಈ ಗ್ರಂಥದ ಮೂಲವಾದ Edifying Parables ಎಂಬ ಪುಸ್ತಕದ ಸಂಕಲನಕಾರರಾದ ಅವರ ಶಿಷ್ಯರೊಬ್ಬರೊಂದಿಗೆ ನಡೆದ ಖಾಸಗಿ ಸಂಭಾಷಣೆಗಳಿಂದ ಆಯ್ದ ನೂರಕ್ಕೂ ಹೆಚ್ಚು ತಿಳಿಹೇಳುವ ನೀತಿಕಥೆಗಳನ್ನು 98 ಶೀರ್ಷಿಕೆಗಳಲ್ಲಿ ಒಳಗೊಂಡ ಆ ಆಂಗ್ಲಭಾಷೆಯ ಗ್ರಂಥದ ಕನ್ನಡ ಅನುವಾದವೇ ಈ ಹೊತ್ತಿಗೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |